ತತ್ವಶಾಸ್ತ್ರದ ಪ್ರಾಧ್ಯಾಪಕರೊಬ್ಬರು, ಆ ವರ್ಷದ ಕೊನೆಯ ಕ್ಲಾಸ್ ತೆಗೆದುಕೊಳ್ಳಲು ಶಾಲೆಗೆ ಬಂದರು. ತಾವು ಕುಳಿತುಕೊಳ್ಳುತಿದ್ದ ಕುರ್ಚಿಯನ್ನು ಮೇಜಿನ ಮೇಲೆ ಎಲ್ಲರಿಗೂ ಕಾಣುವ ಹಾಗೆ ಇಟ್ಟು, “ಪ್ರೀತಿಯ ವಿದ್ಯಾರ್ಥಿಗಳೇ, ಇಷ್ಟು ದಿನ ನನ್ನ ಪಾಠವನ್ನು ಕೇಳಿಸಿಕೊಂಡಿದ್ದೀರಿ, ಅದೆಲ್ಲವನ್ನು ಬಳಸಿಕೊಂಡು, ಈ ಕುರ್ಚಿ ಇಲ್ಲಿ ಇಲ್ಲಾ ಎಂದು ನಿರೂಪಿಸಿ”, ಎಂದರು.
ಸರಿ ಎಲ್ಲರು ಉತ್ತರ ಬರೆಯಲು ಪ್ರಾರಂಭಿಸಿದರು. ಕೆಲವರಂತೂ ಕಾದಂಬರಿ ಬರೆಯುವ ಮಟ್ಟಕ್ಕೆ ಹೋಗುವಂತೆ ಕಾಣುತಿದ್ದರು. ಆದರೆ ಗಣಪತಿ ಮಾತ್ರ ಒಂದೇ ನಿಮಿಷದಲ್ಲಿ ಉತ್ತರ ಬರೆದು ಕೊಟ್ಟು ಹೊರಟುಹೋದ.
ಆ ವರ್ಷದ ತತ್ವಶಾಸ್ತ್ರದಲ್ಲಿ ಹೆಚ್ಚಿನ ಅಂಕ ಗಣಪತಿಗೆ ದೊರಕಿದ್ದು ಎಲ್ಲ ವಿಧ್ಯಾರ್ಥಿಗಳಿಗೂ ಆಶ್ಚರ್ಯ. ನಾವೆಲ್ಲ ಪುಟಗಟ್ಟಲೆ ಬರೆದಿದ್ದರೂ ಗಣಪತಿಗೆ ಹೆಚ್ಚಿನ ಅಂಕ ಹೇಗೆ ಎಂದು ಪ್ರಾಧ್ಯಾಪಕರನ್ನು ಕೇಳಿದಾಗ. ಪ್ರಾಧ್ಯಾಪಕರು ಗಣಪತಿಯ ಉತ್ತರ ಪತ್ರಿಕೆಯನ್ನು ತೋರಿಸಿದರು.
ಅದರಲ್ಲಿ “ಕುರ್ಚಿ ಎಂದರೇನು?” ಎಂದಷ್ಟೇ ಬರೆದಿದ್ದ ಗಣಪತಿ