Archive
ಪುನರ್ಜನ್ಮ
ಬಾಸ್: ನಿಮಗೆ ಪುನರ್ಜನ್ಮದಲ್ಲಿ ನಂಬಿಕೆಯಿದೆಯೇ?
ಗುಮಾಸ್ತ : ಹೌದು ಸಾರ್, ನಂಬಿಕೆಯಿದೆ
ಬಾಸ್: ಓ ಹಾಗಾದರೆ ನಿನ್ನೆ ನಡೆದದ್ದಕ್ಕೆಲ್ಲಾ ಒಂದು ಅರ್ಥವಿದೆ ಎನಿಸುತ್ತದೆ.
ಗುಮಾಸ್ತ : ಯಾಕೆ ಸಾರ್, ಏನಾಯ್ತು?
ಬಾಸ್: ಏನಿಲ್ಲಾ, ನಿನ್ನೆ ನೀವು, ನಿಮಗಿದ್ದ ಒಬ್ಬರೇ ಅಜ್ಜಿ ಸತ್ತು ಹೋದರು ಎಂದು ಬೇಗ ಹೊದಿರಲ್ಲ, ಆಗ ನಿಮ್ಮ ಅಜ್ಜಿ ನಿಮ್ಮನ್ನು ನೋಡಲು ಇಲ್ಲಿಗೆ ಬಂದಿದ್ದರು.
ಕವಿತೆ

ಕಣ್ಣಿಗೆ ಕಾಣದ್ದನ್ನು
ಕಿವಿಗೆ ಕೇಳದ್ದನ್ನು
ಸ್ಪರ್ಶಮಾತ್ರವೇ ಅರಿವುದನ್ನು
ಭಾಷೆ ತಿಳಿಸಲಾರದ್ದನ್ನು
ಹೃದಯ ಮಿಡಿತವನ್ನು…..
ಕವಿತೆಯ ಪದಗಳು
ಸಹೃದಯನ ಮನದ
ಕಲ್ಪನೆಯಲ್ಲಿ ಮೂಡಿಸಬಲ್ಲವು
ಪಯಣ
What do you have to do?
Pack your bags, Go to the station without them, Catch the train, And leave your self behind.
- Open Secret by Wei Wu Wei…
ಈ ದಿನದ ನನ್ನ ಕಾರ್ಯ
ಇರುವುದನ್ನೆಲ್ಲಾ ಗಂಟು ಮೂಟೆ ಕಟ್ಟಿ,
ಕಟ್ಟಿದ ಮೂಟೆಯನ್ನ ಅಲ್ಲೇ ಬಿಟ್ಟು
ನಿಲ್ದಾಣವನ್ನು ತಲುಪಿ,
ಹೊಸ ತೀರದೆಡೆಗೆ
ಹೊರಡಬೇಕಾಗಿದೆ,
‘ನಾನು’ ಎಂಬುದನ್ನು ಕೈಬಿಟ್ಟು.
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ವ್ಯಕ್ತಿತ್ವ

ನಿಂಬೆಯನ್ನು
ಹಿಂಡಿದರೆ ಬರುವುದು
ನಿಂಬೆರಸ ಮಾತ್ರ
ಒಳಗಿರುವುದರಿಂದ
ಹೊರ ಬರುವುದು
ವ್ಯಕ್ತಿತ್ವ ಮಾತ್ರ
