ಕೋಳಿ ಏನು ತಪ್ಪು ಮಾಡಿತ್ತು?

ಶಾಂತಪ್ಪ ಪ್ರೀತಿಯಿಂದ ಕೊಂಡು ತಂದ ಗಿಣಿ, ಬಾಯಿ ಬಿಟ್ಟರೆ ಬರೀ ಅವಾಚ್ಯ ಶಬ್ದಗಳನ್ನೇ ಹೊರಡಿಸುತಿತ್ತು. ಆ ಗಿಣಿ ಒಮ್ಮೆ ಉಪಯೋಗಿಸಿದ ಪದವನ್ನು ಮತ್ತೆ ಉಪಯೋಗಿಸದೆ ಐದು ನಿಮಿಷಗಳ ಕಾಲ ಸತತವಾಗಿ ಕೆಟ್ಟಪದಗಳನ್ನು ಉಪಯೊಗಿಸಿ ಮಾತನಾಡಬಲ್ಲುದಾಗಿತ್ತು. ಶಾಂತಿ ಪ್ರಿಯನಾದ ಶಾಂತಪ್ಪನಿಗೆ, ಗಿಣಿ ಮಾರುವಾತ ಮೋಸಮಾಡಿದ್ದರ ಅರಿವಾದರೂ, ಈಗ ಏನೂ ಮಾಡುವಂತಿರಲಿಲ್ಲ. ಕಾಲಾಂತರದಲ್ಲಿ ಗಿಳಿ ಕೆಟ್ಟ ಮಾತಾಡುವದನ್ನು ಬಿಡಬಹುದು ಎಂದು ನಂಬಿ, ಗಿಳಿಯನ್ನು ತನ್ನ ಬಳಿಯಲ್ಲಿಯೇ ಇಟ್ಟುಕೊಂಡು ಸಾಕುತಿದ್ದನು.

ದಿನಗಳು ಉರುಳಿದರೂ ಗಿಣಿಯ ಮಾತಿನಲ್ಲಿ ಏನೂ ಬದಲಾವಣೆ ಯಾಗಲಿಲ್ಲ. ಒಮ್ಮೆ ಶಾಂತಪ್ಪ ದಣಿದು ಮನೆಗೆ ಬಂದಾಗ, ಗಿಣಿ, ಎಂದಿನಂತೆ ತನ್ನ ಕೆಟ್ಟ ಪದಗಳನ್ನು ಉಪಯೋಗಿಸ ಮಾತನಾಡತೊಡಗಿತು. ಕೋಪ ಬಂದ ಶಾಂತಪ್ಪ, ಗಿಣಿಯ ಕತ್ತನ್ನು ಹಿಡಿದು ಜೋರಾಗಿ ಅಲ್ಲಾಡಿಸಿ, “ಕೆಟ್ಟ ಪದವನ್ನು ಉಪಯೋಗಿಸುವುದನ್ನು ಬಿಟ್ಟು ಬಿಡೋ” ಎಂದು ಗದರಿದನು. ಗಿಣಿ ಇನ್ನಷ್ಟು ರೋಷಗೊಂಡು ಶಾಂತಪ್ಪನನ್ನು ಬಯ್ಯತೊಡಗಿತು. ಅದಕ್ಕೆ ಶಾಂತಪ್ಪ, ಇರು ನಿನಗೆ ಮಾಡ್ತೀನಿ ಎಂದು, ಗಿಣಿಯನ್ನು ತೆಗೆದು ಒಂದು ಪೆಟ್ಟಿಗೆಯಲ್ಲಿ ಅದನ್ನಿತ್ತು ಬಾಗಿಲು ಮುಚ್ಚಿದ್ದನು. ಕೋಪದಿಂದ ಗಿಣಿ ಒಳಗಡೆ ಒದರಾಡಿ, ತನ್ನ ಉಗುರಿನಿಂದ ಪೆಟ್ಟಿಗೆಯ ಬಾಗಿಲನ್ನು ಪರಚತೊಡಗಿತು. ಶಾಂತಪ್ಪ ಅದರ ಗಲಾಟೆಯನ್ನು ಕೇಳಲಾರದೆ ಪೆಟ್ಟಿಗೆಯ ಬಾಗಿಲನ್ನು ತೆರೆದ, ಹೊರಬಂದ ಗಿಣಿ, ಶಾಂತಪ್ಪನನ್ನು ವಾಚಾಮ ಗೋಚರವಾಗಿ ಬಯ್ಯತೊಡಗಿತು, “ಏನೋ ನನ್ನೇ ಕೂಡಿ ಹಾಕ್ತಿಯೇನೋ? ಎಷ್ಟೋ ಕೊಬ್ಬು ನಿನಗೆ? ನಿಮ್ಮಜ್ಜಿ $#@^*()&……”. ಇದನ್ನು ಕೇಳಿಸಿಕೊಂಡ ಶಾಂತಪ್ಪನ ಕೋಪ ತಾರಕಕ್ಕೇರಿ, ಗಿಣಿಯನ್ನು ಹಿಡಿದು ಅಡುಗೆಮನೆಯಲ್ಲಿದ್ದ ಫ್ರಿಡ್ಜ್ ನ ಮೇಲ್ಭಾಗವಾದ ಫ್ರಿಜರ್ ಬಾಗಿಲು ತೆಗೆದು ಅದರೊಳಗೆ ಗಿಣಿಯನ್ನ ಒಳಗೆ ಎಸೆದು, ಬಾಗಿಲು ಮುಚ್ಚಿದ. ಸ್ವಲ್ಪ ಹೊತ್ತು ಒದರಾಡಿದ ಗಿಣಿ, ನಂತರ ಶಾಂತವಾಯಿತು.

ಸ್ವಲ್ಪ ಹೊತ್ತು ಏನು ಶಬ್ದ ಬಾರದಿದ್ದಾಗ, ಆಶ್ಚರ್ಯದಿಂದ ಶಾಂತಪ್ಪ ಫ್ರೀಜೆರ್ ಬಾಗಿಲು ತೆರೆದ, ಗಿಣಿ ಆತನ ತೆರೆದ ಬಾಹುವಿನ ಮೇಲೆ ಮೆಲ್ಲನೆ ನಡೆದು, “ಅಯ್ಯ, ಇದುವರೆವಿಗೂ ನಿನಗೆ ನಾನು ತುಂಬಾ ತೊಂದರೆ ಕೊಟ್ಟೆ, ಇನ್ನು ಮುಂದೆ ಬಾಯಿ ತಪ್ಪಿಯೂ ಕೆಟ್ಟ ಪದಗಳನ್ನು ಉಪಯೋಗಿಸುವುದಿಲ್ಲಾ” ಎಂದು ಹೇಳಿತು. ಶಾಂತಪ್ಪನ ಸಂತಸಕ್ಕೆ ಎಲ್ಲೆಯೇ ಇರಲಿಲ್ಲ, ಇಷ್ಟು ದಿನವಾದರೂ ಬದಲಾಗದಿದ್ದ ಗಿಣಿಯ ಸ್ವಭಾವ, ಇದ್ದಕ್ಕಿದ್ದಂತೆ ಬದಲಾಗಿದ್ದಕ್ಕೆ ಆಶ್ಚರ್ಯ ಪಡುತಿದ್ದಾಗ, ಗಿಳಿ ತನ್ನ ಮಾತು ಮುಂದುವರೆಸಿ, “ಅಂದಹಾಗೆ ಒಳಗಡೆ ಇದ್ದ ಕೋಳಿ ಏನು ತಪ್ಪು ಮಾಡಿತ್ತು” ಎಂದು ಕೇಳಿತು.

ನಿಮ್ಮೆಲ್ಲರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು

Post a comment or leave a trackback: Trackback URL.

Comments

  • ಸುನಾಥ  On December 31, 2010 at 7:50 am

    ಹಹ್ಹಹ್ಹಾ!!
    ಹೊಸ ವರ್ಷದ ಶುಭಾಶಯಗಳು.

  • Keerthi Nidhi  On May 4, 2011 at 8:27 am

    Hahahaha! olley kathe aayithappa !

  • ಬೇಳೂರು ಸುದರ್ಶನ  On June 21, 2011 at 9:19 am

    ಪ್ರಿಯ ಬ್ಲಾಗಿಗರೆ,
    ಕಣಜ ಜಾಲತಾಣ (www.kanaja.in) ಕರ್ನಾಟಕ ಜ್ಞಾನ ಆಯೋಗದ ಮಹತ್ವದ ಕನ್ನಡ ಅಂತರಜಾಲ ಜ್ಞಾನಕೋಶ ಯೋಜನೆ. ಈ ಯೋಜನೆಯು ಕನ್ನಡಿಗರಿಗಾಗಿಯೇ ರೂಪುಗೊಳ್ಳುತ್ತಿರುವ ಜಾಲತಾಣ. ಈ ಜಾಲತಾಣದ ಬಗ್ಗೆ ನಿಮ್ಮ ಬ್ಲಾಗಿನಲ್ಲೂ ಸೂಕ್ತ ಪ್ರಚಾರ ಸಿಗಬೇಕೆಂಬುದು ನಮ್ಮ ವಿನಂತಿ. ದಯಮಾಡಿ (http://kanaja.in/?page_id=10877) ಈ ಕೊಂಡಿಯಲ್ಲಿ ಇರುವ `ಕಣಜ’ ಬ್ಯಾನರುಗಳನ್ನು ನಿಮ್ಮ ಬ್ಲಾಗಿನಲ್ಲಿ ಪ್ರಕಟಿಸಬೇಕೆಂದು ಕೋರಿಕೆ. ಇಲ್ಲಿ ಕೊಟ್ಟಿರುವ ಚಿತ್ರದ ಕೆಳಗೆ ಇರುವ ಸಂಕೇತ ವಾಕ್ಯವನ್ನು ನಿಮ್ಮ ಬ್ಲಾಗಿನ ಹೊಸ ಬ್ಲಾಗ್ ಪ್ರಕಟಣೆ ಜಾಗದಲ್ಲಿ ಪೇಸ್ಟ್ ಮಾಡಿದರೆ ಕಣಜದ ಬ್ಯಾನರ್ ನಿಮ್ಮಲ್ಲಿ ಪ್ರಕಟವಾಗುತ್ತದೆ. ಎಂಬೆಡ್ ಮಾಡುವ ಬಗೆ ಹೇಗೆಂದು ತಿಳಿಯಬೇಕಿದ್ದರೆ ದಯಮಾಡಿ (projectmanager@kanaja.in) ಈ ಮೈಲಿಗೆ ಕಾಗದ ಬರೆಯಿರಿ.
    ಕಣಜ ಜಾಲತಾಣದಲ್ಲಿ ನಿಮ್ಮ ಬ್ಲಾಗುಗಳನ್ನೂ ಪಟ್ಟೀಕರಿಸಲಾಗಿದೆ, ಗಮನಿಸಿ. ಬ್ಲಾಗ್ ಲೋಕದ ಮಾಹಿತಿ ಲೇಖನಗಳು ಕನ್ನಡಕ್ಕೆ ಕೊಡುಗೆ ನೀಡುತ್ತಿರುವುದನ್ನು ಸ್ವಾಗತಿಸುತ್ತ `ಕಣಜ’ವನ್ನೂ ನಿಮ್ಮ ಸಹ-ಬ್ಲಾಗ್ ಎಂದೇ ಪರಿಗಣಿಸಿ ಬೆಂಬಲ ನೀಡಿ, ಪ್ರಚಾರ ನೀಡಿ ಎಂದು ವಿನಂತಿಸಿಕೊಳ್ಳುವೆವು.

    ತಮ್ಮ ವಿಶ್ವಾಸಿ
    ಬೇಳೂರು ಸುದರ್ಶನ
    ಸಲಹಾ ಸಮನ್ವಯಕಾರ, ಕಣಜ ಯೋಜನೆ
    (ಕರ್ನಾಟಕ ಜ್ಞಾನ ಆಯೋಗದ ಯೋಜನೆ)
    ಈ ಮೈಲ್: projectmanager@kanaja.net
    http://www.kanaja.in
    ವಿಳಾಸ: ಇಂಟರ್ ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ ಬೆಂಗಳೂರು
    ನಂ 26/ಸಿ, ಎಲೆಕ್ಟ್ರಾನಿಕ್ಸ್ ಸಿಟಿ, ಹೊಸೂರು ರಸ್ತೆ
    ಬೆಂಗಳೂರು – 560100
    ದೂರವಾಣಿ: ೯೭೪೧೯೭೬೭೮೯

  • Asha Shetty  On January 16, 2012 at 9:31 am

    hahaha…realy nice…manasare nakku bitte…super

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.