ಬದುಕು
ಕನ್ನಡದ ಇಬ್ಬರು ಮೇರು ಕವಿಗಳು ಬದುಕನ್ನು ಹೇಗೆ ವರ್ಣಿಸಿರುವ ರೀತಿಯನ್ನು ಇಲ್ಲಿ ವಿವರಿಸಲಾಗಿದೆ. ನಮ್ಮ ಡಿ.ವಿ.ಗುಂಡಪ್ಪ ನವರು ಬದುಕನ್ನು ಹೀಗೆ ವಿವರಿಸಿದ್ದಾರೆ.
ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬ
ಕುದುರೇ ನೀನ್ ಅವನು ಪೇಳ್ದಂತೆ ಪಯಣಿಗರು
ಮದುವೇಗೊ ಮಸಣಕೊ ಹೊಗೆಂದಕಡೆಗೋಡು
ಪದ ಕುಸಿಯೆ ನೆಲವಿಹುದು ಮಂಕುತಿಮ್ಮ
ಬದುಕು ವಿಧಿಯಾಟ, ವಿಧಿ ಹೇಳಿದಂತೇ ನಾವೆಲ್ಲರೂ ನಡೆದುಕೊಂಡು ಹೊಗುವುದೇ ಬದುಕು ಎಂಬುದು ಡಿ.ವಿ.ಗುಂಡಪ್ಪನವರ ಅನಿಸಿಕೆಯಾದರೆ, ಬೇಂದ್ರೆಯವರು ಬದುಕನ್ನು ಹೀಗೆ ವಿವರಿಸಿದ್ದಾರೆ.
ಬದುಕು ಮಾಯೆಯ ಮಾಟ
ಮಾತು ನೆರೆ ತೊರೆಯಾಟ
ಜೀವಮೌನದ ತುಂಬ ಗುಂಭ ಮುನ್ನೀರು
ಅರುಣೊದಯದ ಕೂಡ ಕರುಣೊದಯವು
ಇರಲು ಎದೆಯ ತುಂಬುತ್ತಿದೆ ಹೊಚ್ಚಹೊನ್ನೀರು
ನಿಜದಲ್ಲೇ ಒಲವಿರಲಿ
ಚೆಲುವಿನಲೇ ನಲಿವಿರಲಿ
ಒಳಿತಿನಲೆ ಗೆಲುವಿರಲಿ ಜೀವ ಗೆಳೆಯ
ಈ ನಾನು ಆ ನೀನು
ಒಂದೆ ತಾನಿನ ತಾನು
ರಾಗ ಲಯ ತಾಳಗಳು ಸಹಜಬರಲಿ
ಆತನಾಕೆಯೆ ನಮ್ಮ
ಜೀವ ನೌಕೆಯ ತಮ್ಮ
ಧ್ರುವ ಮರೆಯದಂತೆ ನಡೆಸುತ್ತಲಿರಲಿ
ದೇವ ಜೀವನ ಕೇಂದ್ರ
ಒಬ್ಬೊಬ್ಬನೂ ಇಂದ್ರ
ಏನಿದ್ದರೂ ಎಲ್ಲ ಎಲ್ಲೆ ತಿಳಿಯಾ
ಬದುಕು ಮಾಯೆಯ ಮಾಟ, ಮಾಯೆ ನಮ್ಮ ಬದುಕನ್ನು ನಡೆಸುವ ವಿಧಿಯಾಗಿರಬಹುದು. ಮಾತು ಎಷ್ಟೇ ಆಡಿದರೂ ಅದೂ ನಿಜವನ್ನೂ ತಿಳಿಸುವುದು ಸಾದ್ಯವಿಲ್ಲ, ನಿಜ ಇರುವ ಕಡೆ ಬೊಟ್ಟು ಮಾಡಿ ತೊರಿಸಬಹುದು. ಆದ್ದರೀಂದಲೇ ಮಾತು ಬರೀ ನೆರೆ ತೊರೆಯಾಟಾ, ಮಾತು ಆಳದ ಬಗ್ಗೆ ಹೇಳುವುದಿಲ್ಲಾ. ಮಾತು ಹೇಳದ್ದನ್ನ ಮೌನ ಹೇಳುತ್ತದೆ, ಮೌನದ ಆಳದಲ್ಲಿ ಸತ್ಯದ ಅರಿವಾಗುತ್ತದೆ. ಬದುಕಿನಲ್ಲಿ ಬಹು ಮುಖ್ಯವಾದ ಅಂಶ ಕರುಣೆ. ಕರುಣೆಯಿಂದ ತುಂಬಿದ ಬದುಕು ಯವಾಗಲೂ ಹಸನಾಗಿರುತ್ತದೆ. ನಮಗೆ ಯಾವಾಗಲೂ ನಿಜದಲ್ಲೇ ಒಲವಿರಲಿ, ಚೆಲುವು ನಲಿವನ್ನ ಕೊಟ್ಟರೆ, ಒಳಿತಿಗೆ ಎಂದೇದು ಗೆಲುವಿರುತ್ತದೆ. ನಾನು ನೀನು ಎಲಾ ಒಂದೇ ಅಂಶದಿಂದ ಹುಟ್ಟಿರುವ ಜೀವಗಳು.ಜೀವನದಲ್ಲಿ ಎಲ್ಲವೂ ಸಹಜವಾಗಿರಲಿ. ದೇವ ಜೀವನದ ಕೇಂದ್ರ, ನಾವೆಲ್ಲರೂ ಅವನ ಅಂಶವನ್ನು ಹೊಂದಿರುವ ಇಂದ್ರರು. ನಮ್ಮಲ್ಲಿ ಎನೇ ಇದ್ದರೂ ನಮ್ಮ ಮಿತಿಯನ್ನು ಅರಿತು ನಡೆಯುವುದು ಉತ್ತಮ ಬದುಕಿಗೆ ದಾರಿ