ಬದಲಾವಣೆ

Yesterday I was clever, so I wanted to change the world.
Today I am wise, so I am changing myself.

-Rumi

ನಿನ್ನೆ ನಾನು ಬುದ್ಧಿವಂತ, ಇಡೀ ಜಗತ್ತನ್ನೇ ಬದಲಿಸಬೇಕೆಂದಿದ್ದೆ
ಇಂದು ನಾನು ವಿವೇಕಿ, ಹಾಗಾಗಿ ನಾನೇ ಬದಲಾಗುತಿದ್ದೇನೆ.

 

ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು

 

ಶುಭಾರಂಭ

I will find new meaning in every joy and sorrow
In that silence,I will hear the voice of spirit,
and freed from this world,I will see another world
where the end is another beginning.
- Rumi

ಪ್ರತಿ ಸುಖ,ದುಃಖದಲ್ಲೂ ಹೊಸ ಅರ್ಥವ ಹುಡುಕುವೆ
ಆ ನಿಶ್ಯಬ್ಧದಲ್ಲೂ ಚೇತನದ ಧ್ವನಿಯನ್ನು ಕೇಳುವೆ
ಎಲ್ಲಿ ಪ್ರತಿ ಅಂತ್ಯವೂ ಮತ್ತೊಂದರ ಶುಭಾರಂಭವಾಗುವುದೋ
ಅಲ್ಲಿ ಜಗತ್ತಿನಿಂದ ಮುಕ್ತವಾದ ಮತ್ತೊಂದು ಜಗತ್ತನ್ನು ಕಾಣುವೆ

ಎಲ್ಲರಿಗೂ ಕನ್ನಡ ರಾಜ್ಯೊತ್ಸವದ ಹಾರ್ಧಿಕ ಅಭಿನಂದನೆಗಳು

ಕೋಳಿ ಏನು ತಪ್ಪು ಮಾಡಿತ್ತು?

ಶಾಂತಪ್ಪ ಪ್ರೀತಿಯಿಂದ ಕೊಂಡು ತಂದ ಗಿಣಿ, ಬಾಯಿ ಬಿಟ್ಟರೆ ಬರೀ ಅವಾಚ್ಯ ಶಬ್ದಗಳನ್ನೇ ಹೊರಡಿಸುತಿತ್ತು. ಆ ಗಿಣಿ ಒಮ್ಮೆ ಉಪಯೋಗಿಸಿದ ಪದವನ್ನು ಮತ್ತೆ ಉಪಯೋಗಿಸದೆ ಐದು ನಿಮಿಷಗಳ ಕಾಲ ಸತತವಾಗಿ ಕೆಟ್ಟಪದಗಳನ್ನು ಉಪಯೊಗಿಸಿ ಮಾತನಾಡಬಲ್ಲುದಾಗಿತ್ತು. ಶಾಂತಿ ಪ್ರಿಯನಾದ ಶಾಂತಪ್ಪನಿಗೆ, ಗಿಣಿ ಮಾರುವಾತ ಮೋಸಮಾಡಿದ್ದರ ಅರಿವಾದರೂ, ಈಗ ಏನೂ ಮಾಡುವಂತಿರಲಿಲ್ಲ. ಕಾಲಾಂತರದಲ್ಲಿ ಗಿಳಿ ಕೆಟ್ಟ ಮಾತಾಡುವದನ್ನು ಬಿಡಬಹುದು ಎಂದು ನಂಬಿ, ಗಿಳಿಯನ್ನು ತನ್ನ ಬಳಿಯಲ್ಲಿಯೇ ಇಟ್ಟುಕೊಂಡು ಸಾಕುತಿದ್ದನು.

ದಿನಗಳು ಉರುಳಿದರೂ ಗಿಣಿಯ ಮಾತಿನಲ್ಲಿ ಏನೂ ಬದಲಾವಣೆ ಯಾಗಲಿಲ್ಲ. ಒಮ್ಮೆ ಶಾಂತಪ್ಪ ದಣಿದು ಮನೆಗೆ ಬಂದಾಗ, ಗಿಣಿ, ಎಂದಿನಂತೆ ತನ್ನ ಕೆಟ್ಟ ಪದಗಳನ್ನು ಉಪಯೋಗಿಸ ಮಾತನಾಡತೊಡಗಿತು. ಕೋಪ ಬಂದ ಶಾಂತಪ್ಪ, ಗಿಣಿಯ ಕತ್ತನ್ನು ಹಿಡಿದು ಜೋರಾಗಿ ಅಲ್ಲಾಡಿಸಿ, “ಕೆಟ್ಟ ಪದವನ್ನು ಉಪಯೋಗಿಸುವುದನ್ನು ಬಿಟ್ಟು ಬಿಡೋ” ಎಂದು ಗದರಿದನು. ಗಿಣಿ ಇನ್ನಷ್ಟು ರೋಷಗೊಂಡು ಶಾಂತಪ್ಪನನ್ನು ಬಯ್ಯತೊಡಗಿತು. ಅದಕ್ಕೆ ಶಾಂತಪ್ಪ, ಇರು ನಿನಗೆ ಮಾಡ್ತೀನಿ ಎಂದು, ಗಿಣಿಯನ್ನು ತೆಗೆದು ಒಂದು ಪೆಟ್ಟಿಗೆಯಲ್ಲಿ ಅದನ್ನಿತ್ತು ಬಾಗಿಲು ಮುಚ್ಚಿದ್ದನು. ಕೋಪದಿಂದ ಗಿಣಿ ಒಳಗಡೆ ಒದರಾಡಿ, ತನ್ನ ಉಗುರಿನಿಂದ ಪೆಟ್ಟಿಗೆಯ ಬಾಗಿಲನ್ನು ಪರಚತೊಡಗಿತು. ಶಾಂತಪ್ಪ ಅದರ ಗಲಾಟೆಯನ್ನು ಕೇಳಲಾರದೆ ಪೆಟ್ಟಿಗೆಯ ಬಾಗಿಲನ್ನು ತೆರೆದ, ಹೊರಬಂದ ಗಿಣಿ, ಶಾಂತಪ್ಪನನ್ನು ವಾಚಾಮ ಗೋಚರವಾಗಿ ಬಯ್ಯತೊಡಗಿತು, “ಏನೋ ನನ್ನೇ ಕೂಡಿ ಹಾಕ್ತಿಯೇನೋ? ಎಷ್ಟೋ ಕೊಬ್ಬು ನಿನಗೆ? ನಿಮ್ಮಜ್ಜಿ $#@^*()&……”. ಇದನ್ನು ಕೇಳಿಸಿಕೊಂಡ ಶಾಂತಪ್ಪನ ಕೋಪ ತಾರಕಕ್ಕೇರಿ, ಗಿಣಿಯನ್ನು ಹಿಡಿದು ಅಡುಗೆಮನೆಯಲ್ಲಿದ್ದ ಫ್ರಿಡ್ಜ್ ನ ಮೇಲ್ಭಾಗವಾದ ಫ್ರಿಜರ್ ಬಾಗಿಲು ತೆಗೆದು ಅದರೊಳಗೆ ಗಿಣಿಯನ್ನ ಒಳಗೆ ಎಸೆದು, ಬಾಗಿಲು ಮುಚ್ಚಿದ. ಸ್ವಲ್ಪ ಹೊತ್ತು ಒದರಾಡಿದ ಗಿಣಿ, ನಂತರ ಶಾಂತವಾಯಿತು.

ಸ್ವಲ್ಪ ಹೊತ್ತು ಏನು ಶಬ್ದ ಬಾರದಿದ್ದಾಗ, ಆಶ್ಚರ್ಯದಿಂದ ಶಾಂತಪ್ಪ ಫ್ರೀಜೆರ್ ಬಾಗಿಲು ತೆರೆದ, ಗಿಣಿ ಆತನ ತೆರೆದ ಬಾಹುವಿನ ಮೇಲೆ ಮೆಲ್ಲನೆ ನಡೆದು, “ಅಯ್ಯ, ಇದುವರೆವಿಗೂ ನಿನಗೆ ನಾನು ತುಂಬಾ ತೊಂದರೆ ಕೊಟ್ಟೆ, ಇನ್ನು ಮುಂದೆ ಬಾಯಿ ತಪ್ಪಿಯೂ ಕೆಟ್ಟ ಪದಗಳನ್ನು ಉಪಯೋಗಿಸುವುದಿಲ್ಲಾ” ಎಂದು ಹೇಳಿತು. ಶಾಂತಪ್ಪನ ಸಂತಸಕ್ಕೆ ಎಲ್ಲೆಯೇ ಇರಲಿಲ್ಲ, ಇಷ್ಟು ದಿನವಾದರೂ ಬದಲಾಗದಿದ್ದ ಗಿಣಿಯ ಸ್ವಭಾವ, ಇದ್ದಕ್ಕಿದ್ದಂತೆ ಬದಲಾಗಿದ್ದಕ್ಕೆ ಆಶ್ಚರ್ಯ ಪಡುತಿದ್ದಾಗ, ಗಿಳಿ ತನ್ನ ಮಾತು ಮುಂದುವರೆಸಿ, “ಅಂದಹಾಗೆ ಒಳಗಡೆ ಇದ್ದ ಕೋಳಿ ಏನು ತಪ್ಪು ಮಾಡಿತ್ತು” ಎಂದು ಕೇಳಿತು.

ನಿಮ್ಮೆಲ್ಲರಿಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು

ಬರವಣಿಗೆ

ಬರೆಯೋದೇ ಕಾಯಕವಾದವನಿಗೆ
ಬರವಣಿಗೆ ಯಾಂತ್ರಿಕವಾಗಬಹುದು
ಸೃಷ್ಟಿ ಕ್ರಿಯೆಯಲಿ ತೊಡಗಿದವಗೆ
ತನ್ನ ಇರುವಿಕೆಯಷ್ಟೇ ಸಹಜವಾಗಬಹುದು

ಅಪ್ಪಂಥರ

ಅಮ್ಮ: (ಕೊಪದಿಂದಿದ್ದ ಮಗನನ್ನು ಕುರಿತು) ಏನಾಯಿತೋ?

ಗುಂಡ: ಅಮ್ಮಾ ಎಲ್ಲರು ನನ್ನನ್ನ ಬಯ್ತಾರೆ, ಮೊದಲಿಗೆ ನೀನು ಬಯ್ತೀಯ, ಅಪ್ಪ ಬಯ್ತಾರೆ, ಕೊನೆಗೆ ಸ್ಕೂಲ್ನಲ್ಲಿರೋ ಎಲ್ಲ ಟೀಚರ್ಸು ಬಯ್ತಾರೆ, ನಂಗೆ ಬಯ್ಸ್ಕೊಂಡು, ಬಯ್ಸ್ಕೊಂಡು ಬೇಜಾರಾಗ್ಹೋಗಿದೆ, ಅದಕ್ಕೆ ಒಂದು ತೀರ್ಮಾನಕ್ಕೆ ಬಂದಿದ್ದೀನಿ.

ಅಮ್ಮ: ಏನ್ತೀರ್ಮಾನಕ್ಕೆ ಬಂದ್ಯೋ?

ಗುಂಡ: ನಾನು ಮದುವೆ ಆಗ್ಬೇಕು ಅಂತ ತೀರ್ಮಾನಿಸಿದ್ದೀನಿ

ಅಮ್ಮ: ಹಾಂ! ಯಾಕೋ?

ಗುಂಡ: ಮದುವೆಯಾದ್ಮೇಲೆ ನಾನು ಅಪ್ಪಂಥರ, ನನ್ನ ಹೆಂಡತಿ ಕೈಲಿ ಮಾತ್ರ ಬೈಸ್ಕೊಬೋದು!!

Follow

Get every new post delivered to your Inbox.